ನಾ ಕಂಡ ಸಂಗೀತ ಕಾರಂಜಿ

ನಾ ಕಂಡ ಸಂಗೀತ ಕಾರಂಜಿ

ನಾ ಮೊದಲು ಕಂಡಿದ್ದು- ಬೃಂದಾವನ ಗಾರ್ಡನ್‌ನ ಸಂಗೀತ ಕಾರಂಜಿಯನ್ನು ನಂತರ ಎದೆತುಂಬಿ ಹಾಡಿದೆನು… ಆ ನಂತರ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮದಲ್ಲಿ- ದಸರಾ ಗೋಷ್ಠಿಗಳಲ್ಲಿ ಅಬ್ಬಾ! ಮೈಸೂರಿನಲ್ಲಿ ಮನೆಮನೆಗಳಲ್ಲಿ ಸಂಗೀತ ಕಾರಂಜಿ ಹರಿಯುತ್ತಿದೆ. ನಮ್ಮ ನೋವ ಮರೆಯಲಿಲ್ಲಿ ತಕ್ಕನಾಗಿದೆ.

ದಿನಾಂಕ ೦೮.೦೮.೨೦೧೫ ರಂದು ಶನಿವಾರದ ದಿನದಂದು ಜಗಮೋಹನ ಪ್ಯಾಲೇಸ್ ಸಭಾಭವನದಲ್ಲಿ ತಣ್ಣನೆಯ ಸಂಜೆಯಲಿ ರಾಷ್ಟ್ರೀಯ ಅಂತರರಾಷ್ಟ್ರೀಯ ಖ್ಯಾತಿ ವಿಖ್ಯಾತಿ ಪ್ರಖ್ಯಾತಿಯ ಗಾಯಕಿಯರಾದ ರಂಜನಿ ಹಾಗೂ ಗಾಯತ್ರಿ ಇವರ ಸಂಗೀತ ಕಾರಂಜಿಗೆ ಜನರು ಸುಜನರಲ್ಲಿ ಕಿಕ್ಕಿರಿದು ಸೇರಿತ್ತು.

ಕೊನೆಯ ಸೀಟಿನಲ್ಲಿದ್ದೆ! ಸಂಗೀತ ಇಂಪೆನಿಸಲಿಲ್ಲವೆಂದರೆ ಎದ್ದು ಹೋಗಲು ಎಂದು. ಆದರೆ… ಕೇಳುತ್ತಾ ಕೇಳುತ್ತಾ ಭಲೇ ರಸಾನುಭೂತಿ ಕಲಗಿತು!

“ಹೂವಿನಿಂದ ನಾರು ಸ್ವರ್ಗ ಸೇರಿತು” ಎನ್ನುವಂತೆ ನನ್ನ ಮಡದಿ ಮಣಿ ವೆಂಕಟಲಕ್ಷ್ಮಿಯಿಂದ ಒಳ್ಳೆಯ ಸಂಗೀತ ಕಾರಂಜಿಗೆ ಬಂದಿದ್ದೆ. ಮೈಸೂರು ಮೈಸೂರಿನ ಜನರೇ ಹಾಗೆ ಮೈಸೂರು ಮಲ್ಲಿಗೆಯಾ ಹಾಗೇ… ಕರ್ನಾಟಕ ಶಾಸ್ತ್ರೀಯ ಗಾಯನ ಜನರ ಮನಸ್ಸು ತಣಿಸಿತು.

ಸಂಗೀತವೇ ಹಾಗೆ ಗೊತ್ತಿಲ್ಲದವರ ತಲೆದೂಗುವಂತೆ ಮಾಡುವ ಮೋಡಿ ಅದಕ್ಕಿದೆ!

ಅಲ್ಲಿ ಆರಂಭ ಶೂರತ್ವವಿರಲಿಲ್ಲ. ಪ್ರತಿಭೆ, ಉತ್ಪತ್ತಿ, ಸಾಧನೆ, ಏನೆಲ್ಲ ಅಲ್ಲಿ ಮೇಳೈಸಿತ್ತು. ಅವರು ಸಂಗೀತ ಶಾರದೆಯರಂತೆ ಜನರ ಸೂರೇಗೊಂಡರು.

ಅಬ್ಬಾ! “ಶ್ರೀ ಮಹಾ ಗಣಪತಿಂ ಭಜೇಹಂ” ಎಂದು ನಮ್ಮ ಮೈಸೂರು ಮಹಾರಾಜರ ಹಾಡನ್ನು ಹಾಡಿದ ರೀತಿ ಎಲ್ಲರಿಗೆ ಮೆಚ್ಚಿಗೆಯಾಯಿತು. ನಂತರ “ಓಂ ನಮೋ ಭಗವತೇ ವಾಸುದೇವಾಯ”, “ಯಾರೆ ರಂಗನ ಯಾರೆ ಕೃಷ್ಣನ” ಮೈಸೂರು ವಾಸುದೇವಾಚಾರ್‍ಯರ “ಭಜನಸೇಯರಾದ” ಶ್ಯಾಮಾಶಾಸ್ತ್ರಿಗಳ “ನನ್ನುಯ್ರೋವು ಲಲಿತ” ತ್ಯಾಗರಾಜರ “ಇಂತ ಸೌಖ್ಯಮನಿ ನೇ…” ಮುತ್ತಯ್ಯ ಭಾಗವತರ “ಶರವಣ ಭವ ಸಮಯಮಿದಿರಾ” ಪುರಂದರದಾಸರ “ಆದದ್ದೆಲ್ಲ ಒಳಿತೇ ಆಯಿತು” “ನಾಚತೆ ಆಯ ನಟಿಕಟ್ಗಿರಿಧರ್” “ಎಂಥಾ ಪುಣ್ಯವೇ ಗೋಪಿ”, “ವಿಕೋಬ ಸಂಗ ಸದಾ” ಇವೆಲ್ಲ ಕೇಳುಗರ ಮನದಲ್ಲಿ ರಸಸ್ವಾದನೆಯನ್ನುಂಟು ಮಾಡಿದವು.

ಸಂಗೀತ ಅದರಲ್ಲೂ ಇಂಥಾ ಸಾಧಕಿಯರಾದ ಇಂಥಾ ಗಾಯಕಿಯರು ಕೇಳುಗರ ಮನವನ್ನು ಗೆಲ್ಲಬಲ್ಲವರೆಂಬುದಕ್ಕೆ ಅಲ್ಲಿ ಕಿಕ್ಕಿರಿದು ನಿಂತು ಕೆಳಗೆ ಹೊರಗೆ ಬಾಗಿಲಲ್ಲಿ ಗುಂಪುಗುಂಪು ಕೇಳುತ್ತಿತ್ತು. ಜನರು ತಲೆದೂಗಿ ಖುಷಿಖುಷಿಯಲ್ಲಿ ಚಪ್ಪಾಳೆ ಹೊಡೆಯುತ್ತಿತ್ತು.

ಎಂದರೋ ಮಹಾನುಭವರು ಉತ್ಕೃಷ್ಟ ಸ್ಥಾಯಿಯಲ್ಲಿ ಸುಲಲಿತ ಸುಮಧುರ ಸೌಖ್ಯ ಭಾವ ಪೂರ್‍ವ ಮನೋಜ್ಞವಾಗಿ ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಪಂಕ್ತಿಯಲಿ ಇವರ ಹೆಸರುಗಳು ಬಹುಕಾಲ ಉಳಿಯುವುವು ಎಂದು ಮನದುಂಬಿ ಬರೆದಿರುವೆ. ಆದ್ದರಿಂದ ಪುಟಾಣಿಗಳೆ… ನೀವೂ ಸಂಗೀತ ಕಲಿಯುವತ್ತ ಆಸಕ್ತಿಯುಳ್ಳವರಾಗಿ ಎಂದು ಹರಸುವೆ. ಆಗಬಹುದೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾರಿ ರುಮ್ಮಾಲ ಸುತ್ತಿ
Next post ಹತ್ತವತಾರಗಳು ಆಗಿಹೋದರೂ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys